Saturday 6 August, 2011

ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು.


ಹರಿವ ನದಿಯು ನೀನು
ಸುರಿವ ಮಳೆಯು ನೀನು
ನೆಲದಿ ಬಿದ್ದ ಬೀಜ ಮೊಳೆಸಿ
ಫಲದಿ ಬಂದೆ ನೀನು

ಹೂವು ಹಣ್ಣ ಮೈಯೊಳು
ಹೊತ್ತ ಬಳ್ಳಿ ನೀನು
ತಾರೆಗಳಿಗೆ ತೀರವಾಗಿ
ನಿಂತ ಬಾನು ನೀನು

ಭಾರ ತಾಳಿ ನಗುವೆ
ನೋವ ಹೂಳಿ ನಲಿವೆ
ಲೋಕವನೇ ಸಾಕಲು
ನಿನ್ನ ಬಾಳ ಸುಡುವೆ

ಮರೆಯ ಬಾಳು ನಿನ್ನದು
ಹೊರುವ ಬಾಳು ನಿನ್ನದು
ಆನಂದದಿ ಇರಲು ನಾವು
ತೆರುವ ಬಾಳು ನಿನ್ನದು.

No comments:

Post a Comment