Saturday, 6 August 2011

ದೇಶದ ಮೊದಲ ಖಾಸಗಿ ರೇಡಿಯೋ ಕೇಂದ್ರ ಸ್ಥಾಪನೆಯ ರೂವಾರಿ......

ಡಾ:ಎಂ.ವಿ.ಗೋಪಾಲಸ್ವಾಮಿ

ಕರ್ನಾಟಕ ಹಲವು ರಂಗಗಳಲ್ಲಿ ಪ್ರಥಮ. ಎಲ್ಲ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯ ಗರಿ ಇರುವುದು ಕನ್ನಡಕ್ಕೆ. ದೇಶದಲ್ಲೇ ಮೊದಲ ಬಾರಿ ವಿದ್ಯುಚ್ಚಕ್ತಿ ಬೆಳಕು ಕ೦ಡ ನಗರ ಬೆ೦ಗಳೂರು. ಅ೦ತೆಯೇ ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರಿಗೆ ರೇಡಿಯೋ ಕೇ೦ದ್ರ ಸ್ಥಾಪಿಸುವ ಹುಮ್ಮಸ್ಸು ಬ೦ದು ಬಿಟ್ಟಿತ್ತು. ಮನಶಾಸ್ತ್ರಕ್ಕೂ ರೇಡಿಯೋಗೂ ಎತ್ತಣಿ೦ದೆತ್ತಣ ಸ೦ಬ೦ಧವಯ್ಯಾ? ಎನ್ನದಿರಿ. ಅವು 1935 ರ ದಿನಗಳು. ಕಾಲೇಜು ಮುಗಿಸಿ ಬ೦ದ ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ ಮಾಡಬೇಕು ಎ೦ಬ ಹುಮ್ಮಸ್ಸು.


ತಮ್ಮ ಒ೦ಟಿಕೊಪ್ಪಲಿನ ಮನೆಯಲ್ಲಿ 30 ವ್ಯಾಟ್ ನಷ್ಟು ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ಫಾರ್ಮರ್)ವೊಂದನ್ನು ಸ್ಥಾಪಿಸಿ ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ 6 ರಿಂದ 8.30ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ 250 ವ್ಯಾಟ್ ಸಾಮರ್ಥ್ಯದ ಪ್ರೇಷಕ ಸ್ಥಾಪಿಸಿ ಮೈಸೂರಿನ ಸುತ್ತಮುತ್ತ 25 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಅನುವು ಮಾಡಲಾಗಿತ್ತು. ಈ ಬಾನುಲಿ ಕೇಂದ್ರ ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸವು ‘ಆಕಾಶವಾಣಿ’ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು. ಆಗ ನಾ.ಕಸ್ತೂರಿಯವರು "ಆಕಾಶವಾಣಿ" ಎ೦ಬ ಹೆಸರನ್ನು ಸೂಚಿಸಿದರು. ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಡಪೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು 1942ರಲ್ಲಿ ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು. 1950ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ಪ್ರಸಾರ ಸೇವೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು. 1950ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಕಡಿಮೆ ಸಾಮರ್ಥ್ಯ ಪ್ರೇಷಕದೊಂದಿಗೆ ಪ್ರಸಾರ ಮಾಡುತ್ತಿದ್ದದು ಹೆಗ್ಗಳಿಕೆ .


ಜೀವನ ನಡೆಸುವುದೇ ಒಂದು ಸಾದನೆಯಾದರೆ ಜೀವನ ನಶ್ವರ ಎನಿಸುತ್ತದೆ ಯಾವುದಾದರೂ ಸಾದನೆ ಮಾಡಲು ಜೀವನ ನಡೆಸಿದರೆ ಜೀವನ ಸಾರ್ಥಕ ಎನಿಸುತ್ತದೆ

ಕನ್ನಡ ಪದಗೊಳು.ಜಿ.ಪಿ.ರಾಜರತ್ನಂ

ಯೆಂಡ ಯೆಡ್ತಿ ಕನ್ನಡ್ ಪದಗೊಳ್
ಅಂದ್ರೆ ರತ್ನಂಗ್ ಪ್ರಾಣ!
ಬುಂಡೇನ್ ಎತ್ತಿ ಕುಡದ್ಬುಟ್ಟಾಂಡೆದ್ರೆ-
ತಕ್ಕೊ! ಪದಗೊಳ್ ಬಾಣ!

ಬಗವಂತ್ ಏನ್ರ ಬೂಮೀಗ್ ಇಳದು
ನನ್ ತಾಕ್ ಬಂದಾಂತ್ ಅನ್ನು;
ಪರ್ ಗಿರೀಕ್ಸೆ ಮಾಡ್ತಾನ್ ಔನು-
ಬಕ್ತನ್ ಮೇಲ್ ಔನ್ ಕಣ್ಣು!

'ಯೆಂಡ ಕುಡಿಯಾದ್ ಬುಟ್ ಬುಡ್ ರತ್ನ!'
ಅಂತ್ ಔನ್ ಏನಾರ್ ಅಂದ್ರೆ-
ಮೂಗ್ ಮೂರ್ ಚೂರಾಗ್ ಮುರಸ್ಕೋಂತೀನಿ
ದೇವರ್ ಮಾತ್ಗ್ ಅಡ್ಬಂದ್ರೆ!

'ಯೆಂಡ ಬುಟ್ಟೆ. ಯೆಡ್ತೀನ್ ಬುಟ್ ಬುಡ್!'
ಅಂತ್ ಔನ್ ಏನಾರ್ ಅಂದ್ರೆ-
ಕಳದೋಯ್ತ್ ಅಂತ ಕುಣದಾಡ್ತೀನಿ
ದೊಡ್ಡ್ ಒಂದ್ ಕಾಟ! ತೊಂದ್ರೆ!


'ಕನ್ನಡ ಪದಗೊಳ್ ಆಡೋದ್ನೆಲ್ಲ
ನಿಲ್ಲೀಸ್ ಬುಡಬೇಕ್ ರತ್ನ!'
ಅಂತ್ ಔನ್ ಅಂದ್ರೆ - ದೇವ್ರ್ ಆದ್ರ್ ಏನು!
ಮಾಡ್ತೀನ್ ಔನ್ಗೆ ಖತ್ನ!

ಆಗ್ನೆ ಮಾಡೋ ಐಗೋಳ್ ಎಲ್ಲಾ
ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ
ಮಾನಾ ಉಳಸಾಕಿಲ್ಲ!

ನರಕಕ್ಕ್ ಇಳ್ಸಿ ನಾಲ್ಗೆ ಸೀಳ್ಸಿ
ಬಾಯ್ ಒಲಿಸಾಕಿದ್ರೂನೆ-
ಮೂಗ್ನಲ್ ಕನ್ನಡ್ ಪದವಾಡ್ತೀನಿ!
ನನ್ ಮನಸನ್ನ್ ನೀ ಕಾಣೆ!

ಯೆಂಡ ಓಗ್ಲಿ! ಯೆಡ್ತಿ ಓಗ್ಲಿ!
ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ

ಹಾಡು ಹಕ್ಕಿಗಳೆ ಹಾರಿ ಬಾನಿಗೆ. ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು.

ಹಾಡು ಹಕ್ಕಿಗಳೆ ಹಾರಿ ಬಾನಿಗೆ
ಮರದ ಗೂಡಿನಿಂದ ;
ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ
ಒಳಗಿನ ಆನಂದ.

ಕಣ್ಣ ಪಡೆದಿರಿ ಬಣ್ಣ ಪಡೆದಿರಿ
ರೆಕ್ಕೆ ಪುಕ್ಕ ಮಾಟ ;
ಕಾಲು ಬಲಿಯಿತು ಕಾಲ ಸಂದಿತು
ಇನ್ನು ಹಾರುವಾಟ.

ದಾರಿ ದಾರಿಯಲಿ ರೆಂಬೆ ರೆಂಬೆಯಲಿ
ಕುತೂ ರಾಗ ಹಾಡಿ ;
ದಾರಿ ಸಾಗುವಾ ದಣಿದ ಜೀವಕೆ
ಕೊಂಚ ಮುದವ ನೀಡಿ.

ನಿಮ್ಮ ದನಿಯ ಆನಂದ ಚಿಮ್ಮಲಿ
ಕೇಳಿದವರ ಎದೆಗೆ ;
ಯಾವ ಹಕ್ಕಿ ಇವು, ಬಂದುದೆಲ್ಲಿಂದ

ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು.


ಹರಿವ ನದಿಯು ನೀನು
ಸುರಿವ ಮಳೆಯು ನೀನು
ನೆಲದಿ ಬಿದ್ದ ಬೀಜ ಮೊಳೆಸಿ
ಫಲದಿ ಬಂದೆ ನೀನು

ಹೂವು ಹಣ್ಣ ಮೈಯೊಳು
ಹೊತ್ತ ಬಳ್ಳಿ ನೀನು
ತಾರೆಗಳಿಗೆ ತೀರವಾಗಿ
ನಿಂತ ಬಾನು ನೀನು

ಭಾರ ತಾಳಿ ನಗುವೆ
ನೋವ ಹೂಳಿ ನಲಿವೆ
ಲೋಕವನೇ ಸಾಕಲು
ನಿನ್ನ ಬಾಳ ಸುಡುವೆ

ಮರೆಯ ಬಾಳು ನಿನ್ನದು
ಹೊರುವ ಬಾಳು ನಿನ್ನದು
ಆನಂದದಿ ಇರಲು ನಾವು
ತೆರುವ ಬಾಳು ನಿನ್ನದು.

ಅತ್ತಿಮಬ್ಬೆ

ಕ್ರಿ. ಶ.೧೦ನೇ ಶತಮಾನದಲ್ಲಿ ಸಮಾಜಕ್ಕೆ ಕಳಶಪ್ರಾಯವಾಗಿ ಬದುಕಿದ್ದಮಹಿಳೆ. ಅತ್ತಿಮಬ್ಬೆ ವೆಂಗಿನಾಡಿನ ಕಮ್ಮದೇಶದ ಪುಂಗನೂರಿನ ಮಲ್ಲಪಯ್ಯನ ಮಗಳು. ಮಲ್ಲಪಯ್ಯನ ತಮ್ಮ ಪೊನಮಯ್ಯ. ಇವರಿಬ್ಬರೂ ಪೊನ್ನನಿಂದ ಶಾಂತಿ ಪುರಾಣವನ್ನು ಬರೆಯಿಸಿದರು. ಚಾಲುಕ್ಯ ವಂಶದ ತೈಲಪಚಕ್ರವರ್ತಿಯ ಆಪ್ತಮಂತ್ರಿ ದಲ್ಲಪ. ಆತನ ಮಗ ನಾಗಮಯ್ಯ, ತಂದೆಯ ಮಂತ್ರಿಮಂಡಲದಲ್ಲಿಯೇ ಸೇನಾನಾಯಕನಾಗಿದ್ದ. ಅತ್ತಿಮಬ್ಬೆ ಮತ್ತು ಆಕೆಯ ತಂಗಿ ಗುಂಡಮಬ್ಬೆಯನ್ನು ನಾಗದೇವನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.

ಅತ್ತಿಮಬ್ಬೆ ನಾಗಮಯ್ಯರ ಮಗ ಅಣ್ಣಿಗದೇವ.ವೀರ ನಾಗಮಯ್ಯ ರಣರಂಗದಲ್ಲಿ ಮೃತನಾಗುತ್ತಾನೆ.ಪತಿಯೊಂದಿಗೆ ಅತ್ತಿಮಬ್ಬೆ ಸಹಗಮನಕ್ಕಾಗಿ ಸಿದ್ಧಳಾದಾಗ, ಎಳೆಯ ಪ್ರಾಯದ ಅಣ್ಣಿಗದೇವನನ್ನು ಸಾಕಿ ಸಲಹುವ ಜವಾಬ್ಡಾರಿಯನ್ನು ಗುಂಡುಮಬ್ಬೆಯು ತನ್ನ ಅಕ್ಕನಿಗೆ ವಹಿಸಿ ತಾನು ಸತಿ ಹೋಗುತ್ತಾಳೆ. ಒಬ್ಬೊಂಟಿಗಳಾದ ಅತ್ತಿಮಬ್ಬೆ ಸುತನ ಜವಾಬ್ದಾರಿಯೊಂದಿಗೆ ಪತಿಯ ಕೆಲಸದ ಜವಾಬ್ದಾರಿಯನ್ನೂ ಸಹ ಹೊತ್ತು ರಾಜಕಾರಣದಲ್ಲಿ ತೈಲಪಚಕ್ರವರ್ತಿಗೂ ತಾಯಿಯಂತೆ ಸಲಹೆ ನೀಡುತ್ತಿದ್ದಳು.

ಕೊಡುಗೈ ದಾನಿಯಾಗಿ ತನ್ನಲ್ಲಿದ್ದ ಒಡವೆಗಳನ್ನೆಲ್ಲಾ ದಾನಮಾಡಿದಳು. ಆಕೆಯಿದ್ದ ಸಂವತ್ಸರಕ್ಕೆ ೧೫೦೦ ವರ್ಷಗಳ ಹಿಂದೆ ಮಹಾವೀರನ ನಿರ್ವಾಣವಾಗಿದ್ದುದರಿಂದ, ಮಹಾವೀರನ ೧೫೦೦ ಮಣಿಖಚಿತ ಸುವರ್ಣ ಬಿಂಬಗಳನ್ನು ಮಾಡಿಸಿ ಅದನ್ನು ದಾನ ಮಾಡಿದ್ದಾಳೆ. ೧೫೦೦ ಸುವರ್ಣ ಜಯಘಂಟೆಗಳನ್ನೂ, ಸುವರ್ಣ ತೋರಣಗಳನ್ನೂ, ಮರದ ಮಂದಾಸನಗಳನ್ನೂ ಮಾಡಿಸಿ ದಾನ ಮಾಡಿದ್ದಾಳೆ. ಆಕೆ ೧೫೦೦ ಬಸದಿಗಳ ನಿರ್ಮಾಣವನ್ನು ಮಾಡಿಸಿದ್ದಾಗಿಯೂ ಆ ಬಸದಿಗಳಿಗೆಲ್ಲಾ ಮಿಗಿಲಾದದ್ದು ಈ ಬ್ರಹ್ಮಜಿನಾಲಯ ಎಂದು ಲಕ್ಕುಂಡಿಯ ಬ್ರಹ್ಮಜಿನಾಲಯದ ಶಾಸನ ಸಾರಿ ಹೇಳುತ್ತಿದೆ. ಕವಿಚಕ್ರವರ್ತಿಯಾದ ರನ್ನನಿಗೆ ಆಶ್ರಯದಾತಳಾಗಿದ್ದು, ಆತನಿಂದ ಅಜಿತನಾಥ ಪುರಾಣದ ರಚನೆಗೆ ಕಾರಣಳಾದಳು. ರನ್ನನನ್ನು ತೈಲಪನ ಆಸ್ಥಾನಕ್ಕೆ ಸೇರಿಸಿದ ಕೀರ್ತಿ ಅತ್ತಿಮಬ್ಬೆಯದು. ಪೊನ್ನನ ಶಾಂತಿಪುರಾಣದ ೧೦೦೦ ಪ್ರತಿಗಳನ್ನು ಮಾಡಿಸಿ ಸಾಹಿತ್ಯ ನಿರ್ಮಾಣ ಹಾಗೂ ಅದರ ಪೋಷಣೆಗೆ ಕಾರಣಳಾಗಿದ್ದಾಳೆ.

ಧಾರ್ಮಿಕ, ಸಾಹಿತ್ಯಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅತ್ತಿಮಬ್ಬೆಯಿಂದ ಸಂದ ಸೇವೆ ಅಪಾರವಾದದ್ದಾಗಿದೆ. ಪುರುಷ ಪ್ರಧಾನ ಸಮಾಜವಾಗಿದ್ದ ಕ್ರಿ. ಶ. ೧೦ನೆಯ ಶತಮಾನದಲ್ಲಿ ಒಬ್ಬೊಂಟಿ, ವಿಧವೆ ಹೆಣ್ಣು ಇಷ್ಟೊಂದು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ರುವುದು ಮಹತ್ವಪೂರ್ಣದ್ದಾಗಿದೆ.

ಉಲ್ಲೇಖಗಳು:
ಅಜಿತನಾಥ ಪುರಾಣ, ಶಾಂತಿ ಪುರಾಣ, ಸಮಯ ಪರೀಕ್ಷೆ, ಲಕ್ಕುಂಡಿಯ ಶಾಸನಗಳು, ಸಮಾಲೋಕನದಲ್ಲಿನ ತಿ.ನಂ.ಶ್ರಿ ಅವರ ಲೇಖನ
ಅತ್ತಿಮಬ್ಬೆಯ ಕಲ್ಪಿತ ಚಿತ್ರ

ಅತ್ತಿಮಬ್ಬೆಯ ಬಿರುದುಗಳು : ಕವಿವರ ಕಾಮಧೇನು, ಗುಣದಂಕಕಾರ್ತಿ, ಜಿನಶಾಸನದೀಪಿಕೆ, ದಾನಚಿಂತಾಮಣಿ, ಗುಣದಖಣಿ, ಜೈನ ಶಾಸನ ರಕ್ಷಾಮಣಿ, ಅಕಲಂಕಚರಿತೆ, ಸಜ್ಜನೈಕ ಚೂಡಾಮಣಿ, ಸರ್ವಕಳಾವಿದೆ ಮುಂತಾದುವು.

೧೯೯೪ ನೇ ಇಸವಿಗೆ ಆಕೆ ಇದ್ದು ಒಂದು ಸಹಸ್ರ ವರ್ಷಗಳಾಗಿದ್ದುದರಿಂದ ೧೯೯೪ನೇ ವರ್ಷವನ್ನು ಕರ್ನಾಟಕ ಸರ್ಕಾರ ಅತ್ತಿಮಬ್ಬೆ ವರ್ಷವೆಂದು ಘೋಷಿಸಿತ್ತು. ಅತಂದಿನಿಂದ ಆಕೆಯ ಸ್ಮರಣಾರ್ಥ ಅತ್ತಿಮಬ್ಬೆ ಪ್ರಶಸ್ತಿಯನ್ನೂ ಸಹ ಪ್ರತಿಷ್ಠಾಪಿಸಿದೆ.

ವಿದ್ಯೆ

ವಿದ್ಯೆ ಸುಲಭವಾಗಿ ದಕ್ಕುವ ವಸ್ತುವಲ್ಲ ತಪಸ್ಸಿನಿಂದ ಮಾತ್ರ ಶಾರದೆಯನ್ನು ಒಲಿಸಿಕೊಳ್ಳಲು ಸಾಧ್ಯ. ಈ ಮಾತು ಕರ್ನಾಟಕ ಸಂಗೀತ ಪರಂಪರೆಯ ಮಹಾನ್‌ ಸಾಧಕ ಬಿಡಾರಂ ಕೃಷ್ಣಪ್ಪನವರು ತಮ್ಮಲ್ಲಿ ಶಿಷ್ಯವೃತ್ತಿಯನ್ನರಸಿ ಬಂದ ಹದಿನಾರರ ತರುಣ ಚೌಡಯ್ಯನಿಗೆ ಹೇಳಿದ್ದು.